26 December 2010

ಉಷಾಕಿರಣ ನಿಂತಿತು . .

ಸಚಿನ್ ಕುಕ್ಕೆ ಬಂದು ಹೋದ ಬಳಿಕ ಅನೇಕ ವಿವಿ‌ಐಪಿಗಳ ದಂಡೇ ಬರಲು ಆರಂಭಿಸಿತ್ತು.ರಾಬಿನ್ ಉತ್ತಪ್ಪ ಸೇರಿದಂತೆ ಇನ್ನಿತರರು ಅದೇ ತಿಂಗಳಲ್ಲಿ ಭೇಟಿ ಇತ್ತರು.

ಹಾಗೇ ಉಷಾಕಿರಣ ಪತ್ರಿಕೆಗೆ ನಾನು ವರದಿ ಮಾಡುವುದಕ್ಕೆ ಆರಂಭಿಸಿ ಸರಿಸುಮಾರು ಒಂದು ವರ್ಷ ಪೂರೈಸಿತ್ತು.ಅದಾಗಲೇ ಅನೇಕ ಸ್ಟೋರಿಗಳನ್ನು ಮಾಡಿ ಮಂಗಳೂರು ಪತ್ರಿಕಾ ಸಮೂಹದಲ್ಲಿ ಗುರುತಿಸಿಕೊಳ್ಳುವುದಕ್ಕೆ ಕಾರಣವಾಯಿತು.

ಕೊನೆಗೆ 2006 ಸಪ್ಟಂಬರ್ ಹೊತ್ತಿಗೆ ಉಷಾಕಿರಣದ ಲೋಕಲ್ ಪೇಜ್ ಕಡಿಮೆ ಆಯಿತು.ಹಾಗಾಗಿ ಸ್ಥಳೀಯ ವರದಿಗಾರರುಗಳ ಅಗತ್ಯ ಅಷ್ಟಾಗಿ ಇರಲಿಲ್ಲ.ಕೊನೆಗೆ ಬಹುತೇಕ ಎಲ್ಲಾ ಬಿಡಿಸುದ್ದಿ ವರದಿಗಾರರು ಉಷಾಕಿರಣದಿಂದ ಹೊರಬಂದರು.ಅದಾಗಿ ಕೆಲವೇ ಅಮಯದಲ್ಲಿ ಉಷಾಕಿರಣದ ಮುದ್ರಣವು ನಿಂತಿತು. ಸರಿಸುಮಾರು ಒಂದೂವರೆ ವರ್ಷಗಳ ಕಾಲ ಉಷಾಕಿರಣಕ್ಕಾಗಿ ವರದಿ ಮಾಡಿ ಸಾಕಷ್ಟು ಅನುಭವಗಳಾಗಿತ್ತು.

ಆಗ ಮತ್ತೆ ಕಾಣಿಸಿದ್ದು ಹೊಸದಿಗಂತ.

ಆ ಹೊತ್ತಿಗೆ ಸುಬ್ರಹ್ಮಣ್ಯದಲ್ಲಿ ಬಿಡಿಸುದ್ದಿ ವರದಿಗಾರನ ಅವಶ್ಯಕತೆ ಹೊಸದಿಗಂತಕ್ಕಿತ್ತು.ತಕ್ಷಣವೇ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಂಡು ವರದಿ ಮಾಡುವುದಕ್ಕೆ ಕಚೇರಿಯಿಂದ ಸೂಚನೆ ನೀಡಿದರು. ಆರಂಭದಲ್ಲಿ ಒಮ್ಮೆ ಸ್ವಲ್ಪ ತೊಂದರೆ ಬಂದರೂ ನಂತರ ಯಾವುದೇ ಅಡ್ಡಿಗಳು ಇರಲಿಲ್ಲ.ಮತ್ತೆ ಉಷಾಕಿರಣದಂತೆಯೇ ವರದಿಗಳು ಹೊಸದಿಗಂತದಲ್ಲಿ ಬರತೊಡಗಿತು.2008 ರ ವರೆಗೆ ಇದೇ ರೀತಿ ಮುಂದುವರಿದಾಗ ಎಪ್ರಿಲ್ ತಿಂಗಳ ಸಮಯದಲ್ಲಿ ಆಗ ತಾನೆ ರಾಜ್ಯದಲ್ಲಿ ಆರಂಭಗೊಂಡಿದ್ದ ಸುವರ್ಣ ನ್ಯೂಸ್ ಚಾನೆಲ್‌ನತ್ತ ದೃಷ್ಠಿ ಬಿತ್ತು.ಹೀಗಾಗಿ 2008 ಜೂನ್ ವೇಳೆಗೆ ಸುವರ್ಣ ನ್ಯೂಸ್ ಸೇರ್ಪಡೆಯ ಅವಕಾಶ ಸಿಕ್ಕಿತು.